ಆತ್ಮೀಯ ಸ್ಪಧಾ೯ಮಿತ್ರರಿಗೆ ಕನ್ನಡದಲ್ಲಿ ಸಂಪೂಣ೯ ಉದ್ಯೋಗದ ಉಪಯುಕ್ತ ಮಾಹಿತಿ 

ಯುವನಿಧಿ ಯೋಜನೆಯ ಸಂಪೂರ್ಣ ಮಾಹಿತಿ

ಕರ್ನಾಟಕ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಸಂಪೂರ್ಣ ಮಾಹಿತಿ 


ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿನ ಯುವನಿಧಿ ಯೋಜನೆಗೆ ಡಿಸೆಂಬರ್‌ 26 ರಿಂದ ಹೋಸ ಅರ್ಜಿಗಳು ಆರಂಭವಾಗಿದೆ. ಅರ್ಹ ಪದವಿ, ಡಿಪ್ಲೋಮಾ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಕೇಳಗಿನಂತೆ ನೀಡಲಾಗಿದೆ.

ಕರ್ನಾಟಕದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಪ್ರಮುಖವಾಗಿ ಯಾವ ಪದವಿ ಮತ್ತು ಡಿಪ್ಲೋಮಾ ಅಭ್ಯರ್ಥಿಗಳು 2023 ರಲ್ಲಿ ತಮ್ಮ ಪದವಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಪೂರ್ಣಗೋಳಿಸಿದ್ದಿರಿ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 


ಯುವನಿಧಿ ಯೋಜನೆಯ ಸಂಪೂರ್ಣ ಮಾಹಿತಿ
Yuvanidhi scheme information

ಯಾರು ಅರ್ಹರು 

  • 2022-23 ನೇ ಸಾಲಿನಲ್ಲಿ ಪದವಿ ಪಡೆದು 6 ತಿಂಗಳು ಪೂರೈಸಿದವರು ಮತ್ತು ಉನ್ನತ ಶಿಕ್ಷಣ ಅಂದರೆ ಸ್ನಾತಕೋತ್ತರ ಪದವಿಗೆ ಸೇರದೆ ಇರುವವರು ಅರ್ಜಿಯನ್ನು ಸಲ್ಲಿಸಬಹುದು.
  • 2023 ರಲ್ಲಿ ಡಿಪ್ಲೋಮಾ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇದೆ.
  • ಪದವಿ ಅಥವಾ ಡಿಪ್ಲೋಮಾ ಪಡೆದು ಕನಿಷ್ಠ 6 ತಿಂಗಳಾಗಿರಬೇಕು ಮತ್ತು 6 ತಿಂಗಳವರೆಗೆ ಯಾವುದೇ ಕೇಲಸಕ್ಕೆ ಸೇರಿರಬಾರದು ಸ್ವಯಂ ನಿರುದ್ಯೋಗಿಗಳೆಂದು ಘೋಷನೆ ಮಾಡಿಕೊಂಡಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದಲ್ಲಿ ವಾಸವಿರಬೇಕು.
  • ಸ್ವಯಂ ಉದ್ಯೋಗ ಹೊಂದಿರಬಾರದು.


ಅಗತ್ಯ ಪ್ರಮಾಣ ಪತ್ರಗಳು 

ಕರ್ನಾಟಕದ ನಿವಾಸಿ ಎಂದು ನಿರೂಪಿಸಲು ಸಲ್ಲಿಸಬೇಕಾದ ದಾಖಲಾತಿ  

ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಇಲ್ಲವೇ ಸಿಇಟಿ ಸಂಖ್ಯೆ ಅಥವಾ ಪಡಿತರ ಚೀಟಿ (ರೇಶನ್‌ ಕಾರ್ಡ) ಸಂಖ್ಯೆಯನ್ನು ಪದವೀಧರ ಅಭ್ಯರ್ಥಿಗಳು ಸಲ್ಲಿಸಬೇಕು. ಮತ್ತು ಡಿಪ್ಲೋಮಾ ಅಭ್ಯರ್ಥಿಗಳು 8, 9ನೇ ತರಗತಿಯ ಅಂಕಪಟ್ಟಿ (ಇದು ಎಸ್‌ಎಸ್‌ಎಲ್‌ಸಿ ನಂತರ ಡಿಪ್ಲೋಮಾ ಮಾಡಿದ್ದರೆ) ಅಥವಾ ಎಸ್‌ಎಸ್‌ ಎಲ್‌ಸಿ ಇಲ್ಲವೇ ಪಿಯುಸಿ (ಪಿಯುಸಿ ಮೇಲೆ ಡಿಪ್ಲೋಮಾ ಮಾಡಿದ್ದರೆ) ಅಥವಾ ಪಡಿತರ ಚೀಟಿ ಸಂಖ್ಯೆ ಇದರಲ್ಲಿ ಯಾವುದಾದರು ಸರಿಯಾದ ದಾಖಲಾತಿಯನ್ನು ನೀಡಬೇಕು. 

ಕಂದಾಯ ಇಲಾಖೆಯಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರಬೇಕು.


ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು 

ಪದವೀಧರರು : 1) ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ 2) ಪಿಯುಸಿ ಅಂಕಪಟ್ಟಿ 3) ಪದವಿ ಪ್ರಮಾಣ ಪತ್ರ ಅಥವಾ ಪದವಿ ಪ್ರಮಾಣ ಪತ್ರ ಇನ್ನು ಬರದೆ ಇದ್ದಲ್ಲಿ ತಾತ್ಕಾಲಿಕ ಪ್ರಮಾಣ ಪತ್ರ ಬೇಕು 4) ಆಧಾರ ಕಾರ್ಡ ಬೇಕು.

ಡಿಪ್ಲೋಮಾ ಅಭ್ಯರ್ಥಿಗಳು : 1) ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ 2) ಪಿಯುಸಿ ಅಂಕಪಟ್ಟಿ 3) ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ 4) ಆಧಾರ ಕಾರ್ಡ ಬೇಕಾಗುವ ದಾಖಲೆಗಳು.

ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ? 

ಅರ್ಹ ಅಭ್ಯರ್ಥಿಗಳು sevasindhugs.karnataka.gov.in ಲಾಗಿನ್‌ ಆಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಯಾರು ಪದವಿ ಅಥವಾ ಡಿಪ್ಲೋಮಾ ತೆರ್ಗಡೆಯಾಗಿದ್ದಿರಿ ಅವರ ಮಾಹಿತಿಯನ್ನು nad.karnataka.gov.in/#/yuvanidhi ಈ ಜಾಲತಾಣದಲ್ಲಿ ಅಪ್ಡೇಟ್‌ ಮಾಡಲಾಗಿದ್ದು ಖಚಿತಪಡಿಸಿಕೋಳ್ಳಬಹುದು. 


ಯುವನಿಧಿ ಯೋಜನೆಯ ಸಂಪೂರ್ಣ ಮಾಹಿತಿ
ಯುವನಿಧಿ


ಕರ್ನಾಟಕದಲ್ಲಿ ಅರ್ಜಿಯನ್ನು ಇಲ್ಲಿ ಯಾವುದಾದರು ಒಂದು ಕೇಂದ್ರಕ್ಕೆ ಭೇಟಿ ನೀಡಿ ಸಲ್ಲಿಸಬಹುದು 

  1. ನಿಮ್ಮ ಹತ್ತಿರದ ಗ್ರಾಮ ಒನ್‌ ಕೇಂದ್ರಗಳಲ್ಲಿ 
  2. ಬಾಪೂಜಿ ಸೇವಾ ಕೇಂದ್ರಗಳಲ್ಲಿ
  3. ಕರ್ನಾಟಕ ಒನ್‌ ಅಥವಾ ಬೆಂಗಳೂರು ಒನ್‌ 
  4. ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್‌ ಆಗಿ ಕೂಡಾ ಅರ್ಜಿ ಸಲ್ಲಿಸಬಹುದು 


ಎಷ್ಟು ಭತ್ಯೆ ನಿಡಲಾಗುತ್ತದೆ ?

ಪ್ರತಿ ತಿಂಗಳು ಪದವೀಧರರಿಗೆ 3000 ಸಾವಿರ ರೂಪಾಯಿ ನೀಡಲಾಗುತ್ತದೆ. ಮತ್ತು ಡಿಪ್ಲೋಮಾ ಪಡೆದವರಿಗೆ 1500 ರೂಪಾಯಿ ನಿಡಲಾಗುತ್ತದೆ. ಮುಖ್ಯವಾಗಿ ಈ ಹಣವನ್ನು ಮುಂದಿನ 02 ವರ್ಷಗಳ ತನಕ ನೀಡಲಾಗುತ್ತದೆ. 

ಯುವನಿಧಿ ಯೋಜನೆಯ ಸಂಪೂರ್ಣ ಮಾಹಿತಿ 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

Call Letter Update of Central and State Government Recruitment